ಆಪರೇಷನ್ ಸಿಂೋಧೂರ ಕಾರ್ಯಾಚರಣೆ ಯುದ್ಧಭೂಮಿಯಲ್ಲಿ ಪಾಲ್ಗೊಂಡು ಸ್ವಗ್ರಾಮಕ್ಕೆ ತೆರಳಿದ ಸೈನಿಕರಿಗೆ ಭವ್ಯ ಸ್ವಾಗತ...
ಮೇಕಲಮರಡಿಯ ಶ್ರೀ ಮಲ್ಲೇಶ್ ನಾಗಪ್ಪ ಅರಕೇರಿ ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿದ ಯೋಧ...
ವಿರೋಧಿ ಪಾಕಿಸ್ತಾನ ದೇಶದಿಂದ ಡ್ರೋನ್ ಗಳ ದಾಳಿ ಮಾಡಿದಾಗ ಹೊಡೆದು ಉರುಳಿಸಿದ ವೀರಯೋಧ...
ಯುದ್ಧಭೂಮಿಯಲ್ಲಿ ಭಾರತೀಯರು ನಾವು ದೇಶಕ್ಕಾಗಿ ನಮ್ಮ ಸೇವೆ ದೇಶಕ್ಕಾಗಿ ನಮ್ಮ ಪ್ರಾಣ ಎಂದು ಮಾತನಾಡಿದ ಯೋಧ...
ತಂದೆ ತಾಯಿ ಹಾಗೂ ಗ್ರಾಮದ ಗುರು ಹಿರಿಯರ ಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ ಎಂದ ಸೈನಿಕ...
ಬೈಲಹೊಂಗಲ ತಾಲೂಕಿನ ಮೇಕಲಮರಡಿ ಗ್ರಾಮದಲ್ಲಿ ಯುದ್ಧ ಭೂಮಿಯಿಂದ ತಾಯ್ನಾಡಿಗೆ ಮರಳಿದ ಶ್ರೀ ಮಲ್ಲೇಶ್ ನಾಗಪ್ಪ ಅರಕೇರಿ ಸೈನಿಕ ಅವರಿಗೆ ಗ್ರಾಮದ ಗುರು ಹಿರಿಯರಿಂದ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಶಿವಾನಂದ ಹಿರೇಮಠ ಹಾಗೂ ಅಧ್ಯಕ್ಷರಾಗಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ನಿಂಗಪ್ಪ ಅರಕೇರಿ, ಗ್ರಾಪಂ ಸದಸ್ಯರಾದ ರಾಜು ಹಣ್ಣಿಕೇರಿ ಚಂದ್ರಯ್ಯ ಹಿರೇಮಠ ನಿವೃತ್ತ ಶಿಕ್ಷಕರಾದ ವಾಯ್ ಆರ್ ಗುಡಿ ಬಸವಣ್ಣೆಪ್ಪ ಮದನಭಾವಿ ಸೋಮನಿಂಗ ಮದನಭಾವಿ ಮಹಾಂತೇಶ್ ಕಂಡ್ಯಯ್ಯನವರ ರಾಜು ಯರಡಾಲ ಲಕ್ಷ್ಮಣ್ ಬೂದ್ನೂರ ಗ್ರಾಮದ ಸಮಸ್ತ ಯುವಕ ಮಿತ್ರರು ಹಾಗೂ ಹಿರಿಯರು ಉಪಸ್ಥಿತರಿದ್ದರು.