ದೇಶನೂರ: ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಮಠ ಶ್ರೀ ಮಡಿವಾಳ ರಾಜ ಯೋಗೀಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಶಿವ ಸಂಚಾರ ಶ್ರೀ ಶಿವಕುಮಾರ ಕಲಾಸಂಘ ರಿ ಸಾಣೆ ಹಳ್ಳಿ ಇವರಿಂದ ಆರು ಫೆಬ್ರುವರಿ 2026ರಂದು ರಾತ್ರಿ 8 ಗಂಟೆಗೆ "ಜಂಗಮದೆಡೆಗೆ" ರಚನೆ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು ನಿರ್ದೇಶನ ಜಗದೀಶ್ ಆರ್ (ಜಾನಿ) ನಾಟಕ ಪ್ರದರ್ಶನ ವಾಗುವುದು ಹಾಗೂ ಫೆಬ್ರವರಿ 7 2026ರಂದು ರಾತ್ರಿ 8 ಗಂಟೆಗೆ "ಕಳ್ಳರ ಸಂತೆ" ರಚನೆ ಪರಿಕಲ್ಪನೆ ವಿನ್ಯಾಸ ನಿರ್ದೇಶನ ಕೃಷ್ಣಮೂರ್ತಿ ಮೂಡಬಾಗಿಲು ನಾಟಕ ಪ್ರದರ್ಶನವಾಗಲಿದೆ.
ದಿನಾಂಕ ಎಂಟು ಫೆಬ್ರವರಿ 2026ರಂದು ರಾತ್ರಿ 8 ಗಂಟೆಗೆ "ಶಿವಯೋಗಿನ ಸಿದ್ದರಾಮೇಶ್ವರ" ನಿರ್ದೇಶನ ವೈ,ಡಿ, ಬಾದಾಮಿ ಈ ಎಲ್ಲ ನಾಟಕಗಳು ಪ್ರದರ್ಶನವಾಗಲಿದೆ ಎಲ್ಲರೂ ನಾಟಕವನ್ನು ವೀಕ್ಷಣೆ ಮಾಡಿ, ಸರ್ವರಿಗೂ ಆದರದ ಸ್ವಾಗತ.