*_ಬೈಲಹೊಂಗಲ ನಗರ ಹೊಸೂರ ರಸ್ತೆಲ್ಲಿರುವ 13/ ಮತ್ತು 14 04-2026ರ ವರೆಗೆ 2 ದಿನದ ಶ್ರೀ ಬಗಳಾಂಬಾದೇವಿ ಜಾತ್ರಾ ಮಹೋತ್ಸವ ಹಾಗೂ ಮಂಗಲ ಕಾರ್ಯಾಲಯ ಲೋಕಾರ್ಪಣೆ ಜರುಗಲಿದೆ_*✍️

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಸೋಮವಾರ ದಿನಾಂಕ 13 -04 2026 ರಂದು ಡಾ ಶ್ರೀ ವೇ ಮೂರ್ತಿ ವೀರಯ್ಯ ಮಹಾಸ್ವಾಮಿಗಳು ಧರ್ಮಧಿಕಾರಿಗಳ ಶ್ರೀ ಬಗಳಾಂಬಾದೇವಿ ದೇವಸ್ಥಾನ ಹಾಗೂ ದೇವಸ್ಥಾನ ಜಾತ್ರಾ ಸಮಿತಿ ಹೊಸೂರ್ ರೋಡ್ ಬೈಲಹೊಂಗಲ ಮೇಷ ಸಂಕ್ರಾಂತಿಯಂದು ಸೂರ್ಯ ರಶ್ಮಿಗಳು ದೇವಿಯ ಮುಖ ಕಾಂತಿಯಿಂದ ಪಾದಗಳವರೆಗೆ ಹೊಂಗಿರಣಗಳ ಹೊಂಬಣ್ಣದೊಂದಿಗೆ ಸೂರ್ಯಮಯವಾಗಿ ಜ್ಯೋತಿ ಸ್ವರೂಪಿಯಾಗಿ ದರ್ಶನ ಕೊಡುವಳು. ಶ್ರೀದೇವಿಗೆ ಅಭಿಷೇಕ ಕುಂಕುಮಾರ್ಚನೆ ಹಾಗೂ ವಿಶೇಷ ಪೂಜೆ ನಡೆಯುತ್ತದೆ ಧರ್ಮ ಸಭೆ ಮಹಾ ಪ್ರಸಾದ ಪಲ್ಲಕ್ಕಿ ಉತ್ಸವ ಕುಂಭಮೇಳ ಮಂಗಳವಾರ ದಿನಾಂಕ 14-04-2026 ಮುಂಜಾನೆ 06-10 ಗಂಟೆಗೆ ಸೂರ್ಯೋದಯಕ್ಕೆ ಶ್ರೀದೇವಿಗೆ ಪೂಜೆ ಶ್ರೀದೇವಿ ಪಾರಾಯಣ ಹಾಗೂ ರುದ್ರ ಗಣ ಹೋಮ ಜರಗಲಿದೆ. ಅದು ಅಲ್ಲದೆ 108 ದೇವಿ ಆರಾಧಕರು ಜಾತ್ರಾ ಮಹೋತ್ಸವಕ್ಕೆ ಆಗಮಿಸಲಿದ್ದಾರೆ. ಶ್ರೀ ಬಗಳಾಂಬಾದೇವಿ ದೇವಸ್ಥಾನ ಸದ್ಭಕ್ತ ಮಂಡಳಿ ಹಾಗೂ ಜಾತ್ರಾ ಉತ್ಸವ ಸಮಿತಿ ಸರ್ವ ಸದಸ್ಯರು ಹಾಗೂ ಬೈಲಹೊಂಗಲ ಹೊಸೂರು ಪಟ್ಟಿಹಾಳ ಕೆಬಿ ಅಸುಂಡಿ, ಚಚಡಿ ಮುರಕಟ್ನಾಳ,ಅರಭಾವಿ, ಸಂಗನ ಕೇರಿ, ಕಲ್ಲೂರ ಇಂಚಲ,ಮಹಾಲಿಂಗಪುರ ಚಿಕ್ಕೂಪ್ಪ ಇಂಗಳಗಿ ಹಾರುಕೇಪ್ಪ ಯರಗಟ್ಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮಸ್ತ ಭಕ್ತ ವೃಂದ ಜಾತ್ರಾ ಮಹೋತ್ಸವಕ್ಕೆ ಪಾಲ್ಗೊಳ್ಳಲಿದ್ದಾರೆ.

Post a Comment

0Comments

Post a Comment (0)