ಬೈಲಹೊಂಗಲ: ವಿಶ್ವವೆ ಒಂದೆ ಕುಟುಂಬ ಎಂಬ ದೃಡ ನಂಬಿಕೆಯಲ್ಲಿದ್ದು ಯಾವುದೆ ದೇಶ ಸಂಕಷ್ಟದಲದಲಿದ್ದರು ಅದಕ್ಕೆ ಸ್ಪಂದಿಸುವ ಭಾರತ ದೇಶದ ಹಿರಿಮೆಯಾದರೆ, ಅದೆ ದೇಶದ ಮೂಲನಿವಾಸಿಗಳು ವಿಭಜಿತ ಬಾಂಗ್ಲಾದೇಶದಲ್ಲಿ ಹಿಂದೂ ಸಮಾಜದ ದೀಪು ಚಂದ್ರದಾಸ ಅವರ ಬರ್ಬರ ಹತ್ಯೆ ಖಂಡನೀಯ ಅಪರಾಧಿಗಳನ್ನ ಬಂದಿಸಿದರೆ ಸಾಲದು ಅವರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಆ ದೇಶ ರಕ್ಷಣೆ ಒದಗಿಸಬೇಕೆಂದು ಬಿಜೆಪಿ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಆಗ್ರಹಿಸಿದ್ದಾರೆ.
ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ ಅವರು,ಭಾರತ ವಿರೋಧಿತೆಯನ್ನು ಮೈಗೂಡಿಸಿಕೊಂಡಿದ್ದ ಬಾಂಗ್ಲಾದ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆಯ ನಂತರ ನಡೆದ ಗಲಭೆಯಲ್ಲಿ ದೀಪು ಚಂದ್ರಹಾಸ ಅವರನ್ನು ಅಲ್ಲಿಯ ಮತಿಯವಾದಿಗಳ ಗುಂಪು ಅವರನ್ನು ಬೆಂಕಿ ಹಚ್ಚಿ ಹತ್ಯೆಮಾಡುವ ಮೂಲಕ ತಮ್ಮ ಕ್ರೂರತನ ಪ್ರದರ್ಶಿಸಿದ್ದಾರೆ. ಇದೊಂದು ಮಾನವೀಯತೆಯ ಕಗ್ಗೊಲೆ. ಅಮಾಯಕ ಹಿಂದೂ ಯುವಕನ ಅಮಾನುಷ ಹತ್ಯೆ ನಿಜವಾಗಲು ಅಲ್ಲಿಯ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆ ಇಲ್ಲಾ ಎನ್ನುವದು ಜಗಜ್ಜಾಹಿರವಾಗಿದೆ. ರಿಕ್ಷಾ ಚಾಲಕ ಗೋಬಿಂದ್ ಬಿಸ್ವಾಸ್ ಅವರ ಮೇಲೆ ನಡೆದ ಹಲ್ಲೆ, ಈ ಹಿಂದೆ ಅಕ್ಷಯ ಪಾತ್ರೆ ಎಂದು ಖ್ಯಾತಿ ಪಡೆದು ಬಾಂಗ್ಲಾದಲ್ಲಿ ಜಾತಿಮತ ಎನ್ನದೆ ಸಂಕಷ್ಟ ಕಾಲದಲ್ಲಿ ಎಲ್ಲರಿಗೂ ಆಹಾರ ನಿಡುವ ಇಸ್ಕಾನ್ ದ ಮೇಲಿನ ದಾಳಿ ಖಂಡನೀಯ. ಭಾರತದ ವೀರ ಸೈನಿಕರ ಬಲಿದಾನ ಪರಾಕ್ರಮ ಮತ್ತು ರಾಜತಾಂತ್ರಿಕ ಸಹಕಾರದಿಂದ ಬಾಂಗ್ಲಾದೇಶ ಸ್ವತ್ರಂತ್ರವಾಗಿದೆ ಎನ್ನುವುದನ್ನು ಆ ದೇಶದ ಕೆಲ ಮತಾಂದರಿಗೆ ಗೊತ್ತಾಗಬೇಕಾಗಿದೆ. ಭಾರತಕ್ಕೆ ಆಸರೆ ಕೆಳಿ ಬಂದ ಆ ದೇಶದ ಮಾಜಿ ಪ್ರಾಧಾನಿಗೆ ಆಶ್ರಯ ನೀಡಿದ್ದು ಭಾರತ, ಅನೇಕ ಸಂಕಷ್ಟ ಸ್ಥಿತಿಯಲ್ಲಿ ಭಾರತ ಸಹಾಯ ಹಸ್ತ ನೀಡಿದೆ. ಬಾಂಗ್ಲಾ ಅಖಂಡ ಭಾರತದ ಭಾಗ ಆದರೆ ಇಲ್ಲಿಯ ಮೂಲನಿವಾಸಿ ಹಿಂದೂಗಳೆ ಅಲ್ಲಿ ಅಲ್ಪಸಂಖ್ಯಾತರಾಗಿ ಅವರನ್ನ ಮಾರಣ ಹೊಮ ಮಾಡುತ್ತಿರುವ ಆ ದೇಶದ ಬಹುಸಂಖ್ಯಾತರ ಕೃತ್ಯ ಖಂಡನೀಯ. ಪ್ರತಿಸಾರಿ ಒಂದಿಲ್ಲ ಒಂದು ಕಾರಣವಿಟ್ಟು ಅಲ್ಲಿಯ ಹಿಂದೂಗಳಿಗೆ ತೊಂದರೆ ನೀಡುತ್ತಿರುವದನ್ನು ನಿಲ್ಲಿಸಿ ಹಿಂದೂಗಳಿಗೆ ರಕ್ಷಣೆ ನೀಡುವ ವಿಚಾರವನ್ನು ಭಾರತದಲ್ಲಿರುವ ಬಾಂಗ್ಲಾದೇಶದ ರಾಯಬಾರಿ ಆ ದೇಶಕ್ಕೆ ತುರ್ತು ಸಂದೇಶ ರವಾನಿಸಬೇಕೆಂದು ಆಗ್ರಹಿಸಿದ್ದಾರೆ.