ಬೈಲಹೊಂಗಲ: ಜಮ್ಮುಕಾಶ್ಮೀರದ ಪಾಲ್ಗಾಮ್ದಲ್ಲಿ ಅಮಾಯಕ ಪ್ರವಾಸಿಗರನ್ನ ಕಗ್ಗೊಲೆ ಮಾಡಿರುವ ಪಾಕಿಸ್ತಾನ ಪ್ರೇರಿತ ಉಗ್ರಗಾಮಿಗಳನ್ನು ಮಟ್ಟಾಶ ಮಾಡಿ ಪಾಕಿಸ್ತಾನದ ನಿರ್ಣಾನಮಕ್ಕೆ ಯುದ್ದ ಸಾರಿದರೆ ಮಾಜಿ ಸೈನಿಕರು ಮತ್ತೆ ಸೈನ್ಯಕ್ಕೆ ಸೆರಲು ಸನ್ನದ್ದರಾಗಿದ್ದಾರೆ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಮಾಜಿ ಸೈನಿಕರ ಸಮನ್ವಯ ಸಮಿತಿ ಹಾಗೂ ಪುಣ್ಯಕೋಟಿ ಸಂಘಟನೆಯ ಆಶ್ರಯದಲ್ಲಿ
ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ವೃತ್ತದಿಂದ ಸಂಗೋಳ್ಳಿ ರಾಯಣ್ಣನ ವೃತ್ತದ ವರೆಗೆ ಬೈಕ್ ರೈಡ್ ನಡೆಸಿ ರಾಯಣ್ಣನ ವೃತ್ತದಲ್ಲಿ ಮೊಂಬತ್ತಿ ಹಚ್ಚಿ ಅಗಲಿದ 26ಜನ ನಾಗರಿಕರಿಗೆ ಶ್ರದ್ದಾಂಜಲಿ ಅರ್ಪಿಸಿ ಮಾತನಾಡಿ, ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರವಾಗಿದ್ದು 370ನೇ ವಿಧಿ ರದ್ದತಿಯಿಂದ ಕಣಿವೆ ರಾಜ್ಯದಲ್ಲಿ ಶಾಂತಿ ನೆಲಸಿ ಭಾರತದ ಮೂಲೆ ಮೂಲೆಯಿಂದ ಕೋಟ್ಯಾಂತರ ಜನ ಭೂಮಿಯ ಮೇಲಿನ ಸ್ವರ್ಗದ ಅನುಭವವನ್ನು ಅಸ್ವಾಧಿಸಲು ಕಾಶ್ಮೀರ ಪ್ರವಾಸ ಕೈಗೊಂಡು ಪುಳಕಿತರಾಗಿದ್ದರು. ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರಿಂದ ಕಣಿವೆ ರಾಜ್ಯದ ಜನತೆ ಆರ್ಥಿಕವಾಗಿ ಸಭಲರಾಗುತಿದ್ದ ಸಂದರ್ಭದಲ್ಲಿ ಅಮಾಯಕ ಹಿಂದೂ ಪ್ರವಾಸಿಗರ ಮೇಲೆ ಧರ್ಮಾಂಧರು ಮಾಡಿರುವ ಈ ಕಗ್ಗೋಲೆಗೆ ಕಾರಣರಾದವರನ್ನು ಹುಡುಕಿ ಎಂದು ಯೋಚಿಸದ ಉತ್ತರ ನಮ್ಮ ಸೈನಿಕರು ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ, ಚಂದ್ರಶೇಖರ್ ನೇಸರಗಿ, ರಾಜಕುಮಾರ ಸವಟಗಿ, ಚಂದ್ರು ಗೌಡರ, ಡಿ.ಎಮ್.ಶಿರಗಾಂವಿ
ಯಲ್ಲಪ್ಪ ಗಡದವರ, ಬಸವರಾಜ ಗುರುವಣ್ಣವರ, ಗಂಗಪ್ಪ ಗುಗ್ಗರಿ, ಮಹಾಂತೇಶ ಕುಸಲಾಪೂರ, ಮಹಾದೇವ ತುರಮರಿ, ಶೇಖರ ನವಲಗಟ್ಟಿ, ಉಳವಪ್ಪ ದೇಗಾಂವಿ, ಈರಪ್ಪ ಗಾಳಿ, ಸಂಗಯ್ಯ ವಸ್ತ್ರದ, ಮಲ್ಲಿಕಾರ್ಜುನ ಅಂಬೋಜಿ, ಗಂಗಪ್ಪ ಛಬ್ಬಿ, ಮಲ್ಲಿಕಾರ್ಜುನ ಹರಸನ್ನವರ, ಬಿ.ಎಸ್.ಹೊಂಗಲ, ಎಮ್.ಜಿ.ಗೋದಿ, ಶಂಕರ ಬೇವಿನ, ಬಾಬು ವಾಲಿಕಾರ, ಗುರುಸಿದ್ದಪ್ಪ ಸಾಧೂನವರ, ಗಂಗಾಧರ ತಿಗಡಿ, ಬಸವರಾಜ ಕಿತ್ತೂರ, ಬಿ.ಎಸ್.ತಲ್ಲೂರ, ಮಲ್ಲವ್ವ ಕಾಡಣ್ಣವರ, ಗೀತಾ ಗರಗದ, ಮಾಲಾ ಸಂಗಣ್ಣವರ ಸೇರಿದಂತೆ ನೂರಾರೂ ಮಾಜಿ ಸೈನಿಕರು ಹಾಗೂ ವೀರನಾರಿಯರು ಇದ್ದರು.