ಗ್ರಾಮ ಪಂಚಾಯಿತಿಗಳಲ್ಲಿಯೂ ಬಜೆಟ್ ಮಂಡಿಸಲು ಆದೇಶ! ಸಚಿವ ಪ್ರಿಯಾಂಕ ಖರ್ಗೆ...!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಗ್ರಾಪಂಗಳಲ್ಲೂ ಬಜೆಟ್ ಮಂಡಿಸಲು ಆದೇಶ
 ಬೆಂಗಳೂರು: ಹಣಕಾಸು ಸಚಿವರು ರಾಜ್ಯ ಬಜೆಟ್ ತಯಾರು ರಾಜ್ಯದ ಗಮನಕ್ಕೂ ಬಾರದ ಕೇಂದ್ರ ಸರ್ಕಾರ ನೇರವಾಗಿ

ಮಾಡುವ ಮಾದರಿಯಲ್ಲೇ ಗ್ರಾಮ ಪಂಚಾಯತ್‌ಗಳೂ ತಮ್ಮ ನಿಮ್ಮ ಕೆಲವು ಯೋಜನೆಗಳಿಗೆ ಆರ್ಥಿಕ ನೆರವು ನೀಡುತ್ತದೆ, ವಾರ್ಷಿಕ ಖರ್ಚು-ವೆಚ್ಚಗಳಿಗೆ ಪಂಚಾಯತ್ ಮುಂಗಡಪತ್ರ ಮಂಡಿಸಿ ಅನುಮೋದನೆ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗುವಂತೆ ಸರ್ಕಾರ ಆದೇಶಿಸಿದೆ.

ಈ ಸಂಬಂಧ ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದ ಎಲ್ಲಾ ಪಂಚಾಯತ್‌ಗಳ ಅಧ್ಯಕ್ಷರಿಗೆ ಪತ್ರ ಬರೆದು, ಕಡ್ಡಾಯವಾಗಿ ಆರ್ಥಿಕ ಸ್ಥಿತಿಗತಿ ಮತ್ತು ಯಾವ ಬಾಬು, ಎಷ್ಟು ವೆಚ್ಚ ಮಾಡುತ್ತೀರಿ ಎಂಬುದನ್ನು ಬಜೆಟ್‌ನಲ್ಲಿ ಘೋಷಿಸಿ, ಸಾರ್ವಜನಿಕಗೊಳಿಸಬೇಕು ಎಂದಿದ್ದಾರೆ.

ಇದಲ್ಲದೆ, ರಾಜ್ಯವೂ ವಾರ್ಷಿಕ ಹಣ ನಿಗದಿಪಡಿಸಿದೆ. ಇದೆಲ್ಲದಕ್ಕೂ ಮಿಗಿಲಾಗಿ ಸ್ಥಳೀಯವಾಗಿ ನೀವು ಸಂಗ್ರಹಿಸುವ ಸಂಪನ್ಮೂಲವೂ ಸೇರಿದಂತೆ ಎಲ್ಲವನ್ನೂ ಕ್ರೂಡೀಕರಿಸಿ ಬಜೆಟ್‌ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಸ್ಥಳೀಯ ಅಭಿವೃದ್ಧಿ ಸೇರಿದಂತೆ ಯಾವುದೇ ಆಡಳಿತಾತ್ಮಕ ವಿಷಯಗಳು ನಿಮ್ಮ ಗಮನಕ್ಕೆ ಮತ್ತು ಅನುಮೋದನೆಗೆ ಬರುತ್ತವೆ, ವಾರ್ಷಿಕ ಅನುದಾನದಲ್ಲಿ ನೀವು ಮುಂದೇನು ಮಾಡುತ್ತೀರಿ ಎಂಬ ಪಕ್ಷಿ ನೋಟ ನಿಮ್ಮ ಪಂಚಾಯತ್ ವ್ಯಾಪ್ತಿಯ ಜನರಿಗೂ ಮತ್ತು ಇಲಾಖೆಗೂ ತಿಳಿಯಬೇಕಿದೆ ಎಂದು ಹೇಳಿದ್ದಾರೆ.

ಶ್ರೀ ಮಹಾಂತೇಶ ಹಿರೇಮಠ ಸಾರಥ್ಯದಲ್ಲಿ...

Post a Comment

0Comments

Post a Comment (0)