ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದಲ್ಲಿ, ಮಹಾ ಚೇತನ, ವಿಶ್ವ ರತ್ನ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮ, ದಿನಾಂಕ 18-01-25 ರಂದು ಸಾಯಂಕಾಲ ೦೬- ಗಂಟೆಗೆ ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಸಚಿವರು, ಲೋಕೋಪಯೋಗಿ ಇಲಾಖೆ ಬೆಂಗಳೂರು ಇವರಿಂದ ಮೂರ್ತಿ ಉದ್ಘಾಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬುದ್ದ,ಬಸವ, ಅಂಬೇಡ್ಕರ್ ಕೂಲಿ ಕಾರ್ಮಿಕ ಸಂಘಟನೆ ವತಿಯಿಂದ ಮಾನ್ಯ ಸಚಿವರು, ಬೆಳಗಾವಿ ಉಸ್ತುವಾರಿ ಗಳು ಶ್ರೀ ಸತೀಶ ಜಾರಕಿಹೊಳಿ ಅವರಿಗೆ ಸಂಘಟನೆ ಪರವಾಗಿ, ರಾಜ್ಯಾಧ್ಯಕ್ಷರಾದ ಮಾರುತಿ,ಕೆಳಗೇರಿ ಹಾಗೂ ಮಾದಿಗ ಬಂಧುತ್ವ ವೇದಿಕೆ ರಾಜ್ಯಾಧ್ಯಕ್ಷರಾದ ಪ್ರಶಾಂತ ಐಹೋಳೆ, ರಮೇಶ ಹರಿಜನ ರವರ ಮೂಲಕ ಸವಿ ನೆನಪಿನ ಕಾಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು...
ಈ ವೇಳೆಯಲ್ಲಿ ಸಂಘಟನೆ ರಮೇಶ್ ಹರಿಜನ, ಸುರೇಶ್ ರಾಯಪಗೋಳ, ಮಲೇಶ ಹರಿಜನ, ಬಸವರಾಜ ತಮ್ಮಣವರ, ಸುರೇಶ್ ಪುಜೇರಿ, ಅನೇಕ ದಲಿತ ಹೋರಾಟಗಾರರು, ಮುಖಂಡರು ಮಳಗಲಿ ಗ್ರಾಮದ ಬಂಧುಗಳು ಭಾಗವಹಿಸಿದರು.