ಚೆ, ಕಿತ್ತೂರು : ಕಿತ್ತೂರು ಮತಕ್ಷೇತ್ರದ ಮಾಜಿ ಶಾಸಕರು ಮಹಾಂತೇಶ ದೊಡ್ಡಗೌಡರ ಸರತಿ ಸಾಲಿನಲ್ಲಿ ನಿಂತು ತಮ್ಮ ಮತದಾನ ಮಾಡಿದರು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಕಿತ್ತೂರು ಮತಕ್ಷೇತ್ರದಲ್ಲಿ ಭರ್ಜರಿಯಾಗಿ ಮತಯಾಚನೆ ಮಾಡುವ ಮೂಲಕ ವಿಕಸಿತ್ ಭಾರತಕ್ಕೆ ಮೋದಿ ಕೊಡುಗೆಯನ್ನು ಕಿತ್ತೂರು ಕ್ಷೇತ್ರದಲ್ಲಿ ಮನೆ ಮನೆಗೆ ತಲುಪಿಸಿದ್ದ ಮಹಾಂತೇಶ ದೊಡ್ಡಗೌಡರ ಇಂದು ತಮ್ಮ ಗ್ರಾಮವಾದ ಮಧನಭಾವಿಯಲ್ಲಿ ಮತದಾನ ಮಾಡಿದರು.
ತದನಂತರ ಮಾತನಾಡಿದ ಮಾಜಿ ಶಾಸಕರು ಮಹಾಂತೇಶ ದೊಡ್ಡಗೌಡರ ಕಳೆದ 10 ವರ್ಷಗಳಿಂದ ಮೋದಿ ಸರ್ಕಾರದ ಸಾಧನೆಯ ಜೊತೆಗೆ ವಿಕಸಿತ ಭಾರತದ ನಿರ್ಮಾಣಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಅಭಿವೃದ್ಧಿ ಪರ ಇರುವ ಸರ್ಕಾರ ಆ ದೃಷ್ಟಿಯಿಂದ ಈ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಗೇಲವು ಖಚಿತ ಎಂದು ವ್ಯಕ್ತಪಡಿಸಿದರು.